ಕಂಬನಿಯ ಲವಣ

ನಲ್ಮೆಯ ಗೂಡು ನಾದಮಯ
ನಲ್ಲನಾ ನುಡಿಯೂ ಪ್ರೇಮಮಯ
ಸಂಚರೀಪ ವಾಂಛೆಗೆ ಅಳುಕುವುದು
ಮೈ ಮನ, ಎನ್ನೋಲವು ಆ ಒಲವ
ಬೇಡುವುದು ಅನುದಿನ.

ಈ ಹೊತ್ತು ಅವನಿರದೆ ತಿಂಗಳನು
ಬಂದಿರಲು, ಹುಣ್ಣಿಮೆಯು
ಹಗೆಯಾಗಿ ಕೊಲ್ಲುತಿರಲು
ಹೇಗೋ ಏನೋ ಹಾಗೆ
ಹಂಬಲಿಕೆ ಕನವರಿಕೆ ಅವನೊಲವಿನಾ ಬಯಕೆ
ಸೆಲೆಯ ಕಡಲು
ಹಾಸು ಹೊದಿಕೆಯು ಕೂಡ ಉರಿಯ ಬಲೆಯು.
ಕಣ್ಣೂರ ಕೊನೆಯಲ್ಲಿ ಬಿಂಬವಾಗುಳಿದಿಹನು
ಕಂಬನಿಯ ಲವಣದಲೂ ಉನ್ಮತ್ತ ಸವಿಯು
ಸಾಗುತಿದೆ ಬರಿಹಾದಿ ಕೆಮ್ಮಣ್ಣ ಹುಡಿಯೆದ್ದು
ಮಲ್ಲಿಗೆಯ ಮೈಗೆಂಪು ಕರಟಿ ಕಪ್ಪು
ಯಾವಗಾಳಿಯ ಬಲೆಗೆ ಸಿಕ್ಕಿತದು ಎಸಳು
ಜರ್ಜರಿತ ಜಾತ್ರೆಯಲ್ಲಿ ನಿರ್ಜೀವ ಕೊರಳು

ಪ್ರೇಮದಲಿ ಛಲಬರದು, ಮೋಹದಲಿ ಮದವಿರದು
ಮಂಗಳೆಗೆ ಮದನನಾ ದಾಹವಿಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಕರಾಗುವಾ: ಪಾಪಬೋಧೆ
Next post ಅಧ್ಯಯನ, ಅಭಿವೃದ್ಧಿ ಮತ್ತು ಹಸಿವಿನ ಭಾಷೆ (ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ)

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys